Friday 11 November 2011

ಹೋಗಲಿರುವ ಜೀವಕ್ಕೆ ಅದೆಷ್ಟು ಆಸೆಗಳೋ..........




       ನಮ್ಮ ಜೀವನ ಪ್ರಾರಂಭ ಅಗೋದೇ ಬಹುಶ ಆಸೆಗಳಿಂದ ಅನ್ಸುತ್ತೆ , ಎಲ್ರಿಗೂ ಅವರದ್ದೇ ಆದ ಅನೇಕ ಆಸೆ ಗಳಿರುತ್ತೆ . ತಮ್ಮ ಜೀವಕ್ಕಿಂತ ಹೆಚ್ಚಿನ ಆಸೆಗಳಿರೊ ಅಂತ ಅನೇಕರನ್ನ ನಾವ್ ನೋಡಬೋದು ... ಮರೆಯಾಗಿ ಹೋಗುವ ಈ ಜೀವಕ್ಕೆ ಅದೆಷ್ಟು ಆಸೆಗಳಿರುತ್ತೆ ಅಲ್ವಾ ...???
ನಾವು ಚಿಕ್ಕವರಾಗಿದ್ದಾಗ ಚಾಕೊಲೇಟ್ , ಗೊಂಬೆ ಗಳನ್ನೆಲ್ಲ ನೋಡ್ದಾಗ ಅದು ಬೇಕೇ ಬೇಕು ಅನ್ನೋ ಹಠ ,ಆಸೆ ಇರ್ತಿತ್ತು . ದೊಡ್ದವರಾಗ್ತಾ ಬಂದ್ ಹಾಗೆ ನಮ್ಮ ಆಸೆಗಳ ಲೋಕವೇ ಬದಲಾಗ್ತಾ ಹೋಗತ್ತೆ ... ನಮ್ಮ ಆಸೆ ಆಕಾಂಕ್ಷೆ ಗಳಿಗೆ ಮಿತಿನೇ ಇಲ್ವೇನೋ ಅನ್ಸತ್ತೆ . ನನಗು ಸಹ ತುಂಬಾ ಆಸೆಗಳಿದ್ವು ,ಬೆಟ್ಟದಷ್ಟು  ಆದ್ರೆ ಇವಾಗ ಅದೆಲ್ಲ ಬರಿ ಕನಸು ಅನ್ನಿಸ್ತಾ ಇದೆ.... :(
 ನಾನು ಅನೇಕರನ್ನ ನೋಡಿದೀನಿ ಅವರ ಜೀವನ ಶೈಲಿ , ಆಸೆಗಳನ್ನೆಲ್ಲ ನೋಡಿದ್ರೆ ನಗಬೇಕೋ , ಅಳಬೇಕೋ ಒಂದೂ ಗೊತ್ತಾಗಲ್ಲ ....  ತುಂಬಾ ವಿಷಯಗಳಿದೆ ಆದ್ರೆ ನನಗೆ ಗೊತ್ತಿರೋ ಸ್ವಲ್ಪ ವಿಷಯಗಳನ್ನ ನಾನ್ ನಿಮ್ ಜೊತೆ ಶೇರ್ ಮಾಡ್ಕೋತಾ ಇದೀನಿ.....

 ವಿದ್ಯಾರ್ಥಿ ಜೀವನದಲ್ಲಿ ಅನೇಕ ಆಸೆಗಳಿರುತ್ತೆ , ಎಲ್ರಿಗಿಂತ ಜಾಸ್ತಿ ಮಾರ್ಕ್ಸ್ ತಗೋಬೇಕು,ಕ್ಲಾಸ್ ನಲ್ಲಿ ಫಸ್ಟ್ ಬರಬೇಕು ಹೀಗೆ ಹಲವು ಆಸೆಗಳಿರುತ್ತೆ... ಅಯ್ಯೋ ಪರೀಕ್ಷೆ ಲಿ ಪಾಸ್ ಆದ್ರೆ ಸಾಕು ಅನ್ನೋ ನಮ್ ತರದವರೂ ಇದಾರೆ... ಪರೀಕ್ಷೇಲಿ ತುಂಬಾ ಕಡಿಮೆ ಮಾರ್ಕ್ಸ್ ಬಂತು , ಫೇಲ್ ಅದೆ ಅಂತ ಅದೆಷ್ಟೋ ಜನ ಆತ್ಮಹತ್ಯೆ ಮಾಡ್ಕೊಂಡಿರೋ ಹಾಸ್ಯದ ಸಂಗತಿಗಳೂ ಇದೆ.  ಜೀವನವೇ ಒಂದು ಪರೀಕ್ಷೆ ಅಂತ ಅವರೆಲ್ಲ ತಿಳ್ಕೊಂಡಿದ್ದಿದ್ರೆ ಅವರೆಲ್ಲ ಈ ರೀತಿ ಮಾಡ್ಕೋತಾ ಇರ್ಲಿಲ್ಲ....ನಮ್ಮ ಜೀವಿತಾವದಿಯಲ್ಲಿ ನಮಗೆ ಅದೆಷ್ಟೋ ಸಮಯವಿದೆ , ಏನ್ ಬೇಕಾದ್ರು ಸಾದಿಸ್ಬೋದು ಅಲ್ವಾ ?? ಇಷ್ಟು ಸಣ್ಣ ವಿಷಯಕ್ಕೆಲ್ಲ ಜೀವಾ ನೆ ನಾಶ ಮಾಡ್ಕೊಬೇಕಾ..?? ಒಂದ್ ಕ್ಷೇತ್ರದಲ್ಲಿ ಆಗ್ಲಿಲ್ಲ ಅಂದ್ರೆ ಇನ್ನೊಂದ್ ಕ್ಷೇತ್ರದಲ್ಲಿ ಸಾದನೆ ಮಾಡ್ಬೋದು , ಅದು ಬಿಟ್ಟು ನಮ್ಮನ್ನೇ ನಂಬಿಕೊಂಡಿರುವ ಜೀವಗಳಿಗೆ ನಾವ್ ಮೋಸ ಮಾಡಬಾರದು .....

      ಆರೋಗ್ಯ ದ ಮೇಲೆ ಹೆಚ್ಚು  ಕಾಳಜಿ ವಹಿಸೋ ಜನ ತುಂಬಾ ಇದಾರೆ. ಮಳೇಲಿ ನೆನೆದರೆ ಜ್ವರ ಬರುತ್ತೆ,ಶೀತ ಆಗುತ್ತೆ  ಅಂತಾ ತುಂಬಾ ಕಾಳಜಿ ತಗೊಳೋರು ದಿನಕ್ಕೆ ಐದು ಆರು ಸಿಗರೇಟ್ ಕಾಲಿ ಮಾಡ್ತಾ ಇರ್ತಾರೆ, ಯಾರಾದ್ರೂ ಸ್ಮೋಕ್ ಮಾಡ್ತಾ ಇರೋವಾಗ ತಮ್ಮ ಮೂಗುಗಳನ್ನು ಭದ್ರವಾಗಿ ಮುಚ್ಚಿಕೊಂಡು ಓಡಾಡುವವರೂ ಅನೇಕ !!!

 ಮುಂದೆ ನಮ್ಮ ಜೀವನಕ್ಕೆ ಬೇಕು ಅಂತ ,ಇವತ್ತಿನ ಜೀವನದ ಬಗ್ಗೆ ಯೋಚಿಸದೆ ಹಣ ಕೂಡಿಡುವ ಅದೆಷ್ಟೋ ಜನ ಇದ್ದಾರೆ, ಇವತ್ತು ಒಂದು ರೂಪಾಯಿ ಖರ್ಚು ಮಾಡಲು ಚಿಂತಿಸುವವರು ಮುಂದಿನ ಜೀವನದ ಬಗ್ಗೆ ಯೋಚಿಸುವುದು ಅದೆಷ್ಟು ಸರಿ ..???  ನಾನು ಒಂದು ವರ್ಷದ ಹಿಂದೆ  ಶಿವಮೊಗ್ಗ ದಿಂದ ಹಾಸನ ಕ್ಕೆ ರೈಲಿನಲ್ಲಿ ಹೋಗುವಾಗ ಕೇಳಿದ  ಒಂದು ನೈಜಗಟನೆ -
  " ತುಂಬಾ ಸಂತಸದ ಫ್ಯಾಮಿಲಿ, ಅಪ್ಪ ಅಮ್ಮ ಮಗ ಮಗಳು  ಕೇವಲ ನಾಲ್ಕು ಜನರ ಪುಟ್ಟ ಫ್ಯಾಮಿಲಿ , ಅತ್ಯಂತ ಸಂತೋಷದಿಂದಲೇ ಜೀವನ ನಡೀತಾ ಇತ್ತು.... ತಮ್ಮ ಮಗನ ವಿದ್ಯಾಭ್ಯಾಸಕ್ಕೆ ಅಪ್ಪ ತುಂಬಾ ಕಷ್ಟ ಪಟ್ಟು ಹಣ ಸಂಪಾದಿಸಿದ್ರಂತೆ , ಹಾಗೆ  ಅವನ ವಿದ್ಯಾಭ್ಯಸಾನೂ ನಡೀತಾ ಇತ್ತು. ಬೇರೆ ವಿಷಯಗಳಿಗೆ ಹಣ ಖರ್ಚು ಮಾಡೋಕೆ ಮೊದ್ಲು ಆತ ತುಂಬಾ ಯೋಚಿಸ್ತಾ ಇದ್ರು, ಮಗಳ ಮದುವೆಗೆ ಅಂತ ಸಹ ಹಣ ಕೂಡಿಟ್ಟಿದ್ರು. ಜನ ಅವರನ್ನ ಜಿಪುಣ ಅಂತ ಕರಿತಾ ಇದ್ರು..ಮುಂದಿನ ಜೀವನದ ಬಗ್ಗೆ ತುಂಬಾ ಯೋಚನೆಗಳಿದ್ದಿದ್ರಿಂದ ಅವ್ರು ಜಿಪುಣ ಆಗಿದ್ರು ಅನ್ಸತ್ತೆ. ಹೀಗೆ ಜೀವನ ನಡೀತಾ ಇತ್ತು , ಮಗಳು ಪಿ.ಯೂ.ಸಿ ಗೆ ವಿಧ್ಯಾಭ್ಯಾಸ ಮುಗ್ಸಿದ್ಲು , ನಂತರ ಎರಡು ವರ್ಷಗಳಲ್ಲಿ ಅವಳ ಮದುವೆನೂ ಆಯ್ತು.... ದುರದೃಷ್ಟ ಅಂದ್ರೆ ಮದುವೆ ಆಗಿ ಒಂದು ವರ್ಷದೊಳಗೆ ಭೀಕರ ರಸ್ತೆ ಅಪಘಾತದಲ್ಲಿ ಮಗಳು ಅಳಿಯ ಇಬ್ರೂ ವಿಧಿವಶರಾದರು... ಇತ್ತ ಮಗನ ವಿದ್ಯಾಭ್ಯಾಸನೂ ಮುಗಿತಾ ಬಂದಿತ್ತು .. ಮಗಳ ನೆನಪು ಮಾಸುತ್ತಾ ದಿನಗಳು ಉರುಳುತ್ತಿತ್ತು ..ಇವರ ಜೀವನದ ಅತ್ತ್ಯಂತ ಅಹಿತಕರ ಘಟನೆ ಅಂದ್ರೆ .. ಮಗ  ಎಂ.ಎ  ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದಾಗ ಅದೇನೋ ಜ್ವರ ಅಂತ ಬಂದು ಮೂರೇ ದಿನದಲ್ಲಿ ಇಹಲೋಕ ತ್ಯಜಿಸಿದ್ದು.... ನೋವಿನ ಮೇಲೆ ನೋವು ಅನುಭವಿಸುತ್ತ ಎರಡು ಜೀವಗಳು ಅದೆಷ್ಟು ದಿನ
ಬದುಕಿರಬಹುದು..... ಚಿಂತೆಯಲ್ಲೇ ಜೀವನ ಸಾಗುತ್ತಿದೆ ... ಕೂಡಿಟ್ಟ ಅಷ್ಟೊಂದು ಹಣ,ಆಸ್ತಿ ಪಾಸ್ತಿ ಯಾರ ಪಾಲಿಗೆ...?? ಅವರ ಕಡೆಯವರು ಅಂತ ಅವರಿಗೆ ಯಾರೂ ಇಲ್ವಂತೆ.. ಅವರ ಮುಂದಿನ ಗತಿ....?????? "
    ನೋಡಿದ್ರಾ ಆಸೆಗಳು  ಎಷ್ಟೊಂದು ಅಲ್ವಾ....???

         ಮತ್ತೊಂದು ಸಂಗತಿ ಅಂದ್ರೆ ಅನೇಕರು ನಮ್ ಫ್ರೆಂಡ್ಸ್ ನಮ್ ಜೊತೆ ನಾವ್ ಅಂದ್ಕೊಂಡಿರೋ ಹಾಗೆ ಇರ್ಬೇಕು ಅನ್ನೋ ಆಸೆ ಇಟ್ಕೊಂಡಿರ್ತಾರೆ ,ಅವರ ಜೀವನ ಶೈಲಿ ಇವರಿಗೋಸ್ಕರ ಬದಲಾಗಬೇಕೆ...?? ಇವರ ಆಸೆ ಆಕಾಂಕ್ಷೆ ಗಳಂತೆ ಅವರಿಗೂ ಇರುತ್ತೆ ಅನ್ನೋದನ್ನ ಮರೆತು  ಅವರ ಸ್ನೇಹವನ್ನೇ ದೂರ ಮಾಡಿಬಿಡ್ತಾರೆ ... ಸ್ನೇಹಿತರು ಒಬ್ರಿಗೊಬ್ರು ಅರ್ತ ಮಾಡ್ಕೊಂಡು , ಹೊಂದ್ಕೊಂಡು ತಮ್ಮ ಸ್ನೇಹನಾ ಶಾಶ್ವತವಾಗ್ ಇರೋಹಾಗ್ ಮಾಡ್ಕೋಬೇಕು , ಕೇವಲ ಆಸೆಗಲಿಗೋಸ್ಕರ ಸ್ನೇಹವನ್ನು ಬಲಿ ಕೊಡಬಾರದು... ಸ್ನೇಹ ಅತ್ಯಂತ  ಅಮೂಲ್ಯವಾದದ್ದು.. ಎಲ್ರಿಗೂ ಅಂತಹ ಅಮೂಲ್ಯ ವಾದ ಸ್ನೇಹ ಸಿಗೋದಿಲ್ಲ .... ಸೀಕ್ಕಿದ್ದನ್ನ ಹಾಳ್ಮಾಡ್ಕೋಬೇಡಿ ......

         ಪ್ರೀತಿ ವಿಷಯಕ್ಕೆ ಬಂದ್ರೆ ಅಲ್ಲೂ ಸಹ ಇಂತಹ ಹಲವು ಆಸೆಗಳಿಂದ ಆಗುವ ದುಷ್ಪರಿಣಾಮಗಳು ಅನೇಕ... ನಾನು ಪ್ರೀತಿಸಿದ ಹುಡುಗ/ಹುಡುಗಿ ಸಿಗ್ಲಿಲ್ಲ ಅಂತ ಅದೆಷ್ಟೋ ಜನ ಆತ್ಮಹತ್ಯೆ ಮಾಡ್ಕೊಂಡಿರೋ ಸಂಗತಿಗಳು ಹಲವಾರು...  ತಮ್ಮ ತಂದೆ ತಾಯಿ ಬಂಧು ಬಳಗ ದವರ ಯೋಚನೆ ಇಲ್ಲದೆ ಕೇವಲ ಕೆಲವು ಕೆಲವು ದಿನಗಳ ಹಿಂದೆ ಹುಟ್ಟಿಕೊಂಡ ಪ್ರೀತಿ ಸಿಗಲಿಲ್ಲ ವೆಂದು , ಜನ್ಮತಃ ವಾಗಿ ಸಿಕ್ಕ ಪ್ರೀತಿಯನ್ನೇ ದಿಕ್ಕರಿಸಿ ಆತ್ಮಹತ್ಯೆ ಮಾಡಿಕೊಳ್ಳುವುದು ಅದೆಷ್ಟು ಸರಿ..??? ನನ್ನ ಗೆಳೆಯನೂ ಸಹ ಇಂತಹ ಒಂದು ಹೀನ ಕೃತ್ಯಕ್ಕೆ ಸಾಕ್ಷಿ ಯಾಗಿದ್ದಾನೆ ಎಂದು ಹೇಳಿಕೊಳ್ಳುವುದಕ್ಕೆ ನನಗೆ ಬೇಸರ..... ಅವನ ಅಗಲಿಕೆಗಿಂತ ಅವನ ಪೋಷಕರ ಕಣ್ಣೀರಿನ ನೋವಿನ ದಿನಗಳು ನೆನೆಸಿಕೊಳ್ಳುವುದೇ ಕಷ್ಟದ ಸಂಗತಿ.......

                      ಹೀಗೆ ಹಲವು ಆಸೆಗಳ ನಡುವೆ ನಮ್ಮ ಜೀವನ ಸಾಗುತ್ತಿದೆ . ನಮ್ಮ ಆಸೆಗಳು ನಮ್ಮ ಜೀವನ ಏಳಿಗೆಗೆ ಕಾರಣವಾಗಬೇಕೇ ಹೊರತು ನಮ್ಮ , ಅವನತಿ ಗೆ ಕಾರಣವಾಗಬಾರದು ....  ನಮ್ಮನ್ನು ನಂಬಿಕೊಂಡಿರುವ ಅನೇಕ ಜೀವಗಳಿಗೆ ನಿರಾಸೆಯಾಗುವಂತಿರಬಾರದು ....

ಮರೆಯಾಗಲಿರುವ ಈ ಜೀವನದ ಆಸೆಗಳು ಮಿತಿಯಲ್ಲಿದ್ದರೆ  ಒಳಿತಲ್ಲವೇ......?????

Wednesday 2 November 2011

ಮರೆಯಲಾಗದ ಆ ಜೀವ........


ಕೆಲವು ಸನ್ನಿವೇಶಗಳು, ಕೆಲವು ವ್ಯಕ್ತಿಗಳು ಕೆಲವರ  ಮನಸ್ಸಿನಲ್ಲಿ ಅಳಿಸಲಾಗದೆ ಉಳಿದು ಬಿಡುವಂತಹ ಅನೇಕ  ವಿಷಯಗಳನ್ನು ಎಲ್ರೂ ಕೆಳಿರ್ತಾರೆ ಜೊತೆಗೆ ತಮ್ಮ ಜೀವನದಲ್ಲಿಯೂ ಸಹ ಅನೇಕರಿಗೆ ಇಂತಹ ಅನೇಕ ವಿಷಯಗಳು ಅನುಭವಕ್ಕೆ ಬಂದಿರಬಹುದು, ನಮ್ಮ ಮನಸ್ಸಿಗೆ ತುಂಬಾ ಬೇಜಾರ್ ಆದಾಗ , ನೋವಾದಾಗ ಅಂತಹ ಸನ್ನಿವೇಶಗಳನ್ನ ನೆನೆಪಿಸಿಕೊಂಡರೆ ಸ್ವಲ್ಪ ನೆಮ್ಮದಿ ದೊರಕುವುದಂತೂ ಕಂಡಿತ..... ಇದೇ ರೀತಿ ನಮ್ಮ ನೋವು ನಲಿವುಗಳನ್ನ ಹಂಚಿಕೊಳ್ಳೋಕೆ ನಮ್ಮ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಕೊಳ್ಳುವ ಆ ಜೀವ ನಿಜಕ್ಕೂ ಆದ್ಭುತ .....
ನಾವೂ ಸಹ ಇನ್ನೊಬ್ಬರ ಜೀವನದಲ್ಲಿ ಇಂತಹ ಸ್ಥಾನ ಗಳಿಸುವುದು ಬಹು ದೊಡ್ಡ ಮಾತೇನಲ್ಲ .... ನಮ್ಮ ಆಚಾರ ವಿಚಾರ ಗಳು , ನಮ್ಮ ಜೀವನ ಶೈಲಿ ಅವರ ಮೇಲೆ ತುಂಬಾ ಪ್ರಭಾವ ಬೀರುವಂತಿರಬೇಕು....

 ನನ್ನ ಜೀವನದಲ್ಲಿ ನಾ ಕಂಡ ಅಂತಹ ಒಬ್ಬ ಆದ್ಭುತ ವ್ಯಕ್ತಿಯ ಬಗ್ಗೆ ಈ ನನ್ನ ಮಾತು....
 ತಾಯಿ ತನ್ನ ಮಗುವಿಗೆ ಜನ್ಮ ನೀಡಿದ ಸಂಧರ್ಬದಲ್ಲಿ , ಆ ಪುಟ್ಟ ಕಂದನ ಅಳು ಆಕೆಯ ಮನದಲ್ಲಿ ಅದೆಷ್ಟು ಸಂತೋಷದ ಅಲೆಯನ್ನು ಹುಟ್ಟಿಸುತ್ತದೆಂದರೆ ಅದಕ್ಕೆ ಮಿತಿಯೇ ಇಲ್ಲ , ಬಂಧು ಬಳಗದವರ ಸಂತಸ ಹೇಳಕೂಡದು .... ಇಪ್ಪತ್ತು ವರ್ಷಗಳ ಹಿಂದೆ ನಡೆದ ಇಂತಹದ್ದೇ ಒಂದು ಸಂದರ್ಬವನ್ನು ಆಕೆ ದಿನದಲ್ಲಿ ಒಮ್ಮೆಯಾದರೂ ನೆನೆಸದೆ ಕಳೆದ ದಿನಗಳೇ ಇಲ್ಲ , ಆ ಜನ್ಮ ದಿನದಿಂದ ಆ ಜೀವದ ಕಡೆಯ ದಿನಗಳ ವರೆಗೂ ನಡೆದ ಗಟನೆಗಳು, ಪಟ್ಟ ಕಷ್ಟಗಳು, ಹಂಚಿಕೊಂಡ ಸಂತೋಷ ಇವೆಲ್ಲವನ್ನೂ ಮರೆಯುವುದು ಈ ಜನ್ಮದಲ್ಲಿ ಅಸಾದ್ಯ ...
ಆಕೆಯ ಐವತ್ತು ವರ್ಷಗಳ ಜೀವನದಲ್ಲಿ ನಾ ಕಂಡ ಕೇವಲ ಹತ್ತೊಂಬತ್ತು  ವರ್ಷಗಳು ನನ್ನ ಜೀವನದ ಮರೆಯಲಾಗದ ಮಹಾ ವರ್ಷಗಳು...
 ಆಕೆಯ ಬಗ್ಗೆ ಹೇಳುವುದಾದರೆ ವಿಷಯಗಳು ಅನೇಕ...ಪರರ ಸಂತೋಷಕ್ಕೆ ಕಾರಣರಾಗಿ,ನೆರೆಹೊರೆಯವರ ಕಷ್ಟಗಳಿಗೆ ಕಣ್ಣೀರಿಟ್ಟು ಸಹಕರಿಸಿ, ಪರರಿಗೆ ಸಹಾಯ ಮಾಡುವುದರಲ್ಲೇ ತನ್ನ ಜೀವನದ ಅತಿ ಹೆಚ್ಹಿನ ಕ್ಷಣಗಳನ್ನು ಕಳೆಯುತ್ತಿದ್ದ ಆ ಜೀವಕ್ಕೆ ನನ್ನ ಮೇಲಿನ ಪ್ರೀತಿ , ಮಮತೆ ಅಪಾರ. ಮುಂದಿನ ಜೀವನದ ಬಗ್ಗೆ ಅದೆಷ್ಟೋ ಕನಸುಗಳನ್ನು ಹೊಂದಿದ್ದ ನನ್ನ ಪ್ರೀತಿಯ ಆ ಜೀವ ತನ್ನ ಕನಸುಗಳ ಜೊತೆಯಲ್ಲೇ ಮರೆಯಾದ  ಆ ಸಂದರ್ಭ(14/08/2010) ನನ್ನ ಜೀವನದ ಮರೆಯಲಾಗದ ಬಹು ದೊಡ್ಡ ಕಹಿಘಟನೆ...
 ನನ್ನ ಜೀವನದ ಯಾವುದೇ ಸಂತೋಷದ ಸಂದರ್ಭದಲ್ಲಿ ನನಗಿಂತ ಮೊದಲು ಅತೀ ಹೆಚ್ಚು ಸಂತಸ ಪಡುತ್ತಿದ್ದ ನನ್ನ ಜೀವವೇ ಇಲ್ಲದ ಈ ನನ್ನ ಜೀವನ ನೀರಿಲ್ಲದ ಬರಡು ಭೂಮಿಯಂತೆ, ಜೀವನದಲ್ಲಿ ಕೆಲವು ದುಃಖದ ಸಂದರ್ಬದಲ್ಲಿ ಖುಷಿಯಿಂದ ಇರುವಂತೆ ನಟಿಸುವುದಕ್ಕಿಂತ,ನಮ್ಮ ಸಂತಸದ ಸಂಧರ್ಬ ಗಳನ್ನು ನಮ್ಮ ನೆಚ್ಚಿನವರೊಂದಿಗೆ ಹಂಚಿಕೊಳ್ಳಲಾಗದೇ ಇರುವಂತ ಸಂಧರ್ಬ ಅತ್ಯಂತ ಕಷ್ಟಕರ . ಇಂತಹ ಒಬ್ಬ ಆದ್ಭುತ ವ್ಯಕ್ತಿಯನ್ನು ನನ್ನ ಈ ಪುಟ್ಟ ಜೀವನದಿಂದ ಇಷ್ಟು ಬೇಗ
ಕಳೆದು ಕೊಂಡ ನತದೃಷ್ಟ  ನಾನು. ನನ್ನ ಪ್ರೀತಿಯ ಜೀವದ ನೆನೆಪಿನಲ್ಲೇ , ಅವರ ಮಾರ್ಗದರ್ಶನದಲ್ಲೇ,ಬೇರೆಯವರಿಂದ ಪ್ರತಿಯಾಗಿ ಏನನ್ನೂ ಬಯಸದೇ ಅವರ ಜೀವನ ಶೈಲಿಯಂತೆ ಪರರ ಸಂತೋಷಕ್ಕೆ ಕಾರಣನಾಗುತ್ತ ನನ್ನ ಜೀವನವನ್ನು ಕಳೆಯಬೇಕೆಂಬುದು ನನ್ನ

ಜೀವನದ ಅತೀ ದೊಡ್ಡ ಆಸೆ..........

Tuesday 1 November 2011

ಮೊದಲ ಮಾತು

"ಮನಸ್ಸಿನ ಮಾತು"  ಕೇವಲ ನನ್ನ ಮನಸ್ಸಿನ ಮಾತಲ್ಲ , ನಾನು ಕೇಳಿದ , ಓದಿದ,ಜೊತೆಗೆ ನನ್ನ ಜೀವನದಲ್ಲಿ ನನ್ನ ಅನುಭವಕ್ಕೆ ಬಂದ  ಕೆಲವೇ ಕೆಲವು ವಿಷಯಗಳ ಹಂಚಿಕೆ .... ನಮ್ಮ ಜೀವನದ ಹಾದಿಯಲ್ಲಿ ಅದೆಷ್ಟೋ ವಿಷಯಗಳನ್ನು ನಾವು ಅನುಭವಿಸುತ್ತಾ , ತಿಳಿದುಕೊಳ್ಳುತ್ತಾ, ಹೋಗುತ್ತೇವೆ....ಅಂತಹ ಅದೆಷ್ಟೋ ವಿಷಯಗಳನ್ನು ಬೇರೆಯವರ ಜೊತೆ ಹಂಚಿಕೊಳ್ಳುವದರಲ್ಲಿ ಅದೇನೋ ಉಲ್ಲಾಸ , ಸಂತೋಷ... ನಾವು ಹುಟ್ಟಿದಾಗಿನಿಂದ ಸಾಯುವವರೆಗೆ ನಮ್ಮ ಜೀವನ ಶೈಲಿ ವಿಬಿನ್ನ ಹಂತಗಳಲ್ಲಿ ವಿಭಿನ್ನ ರೀತಿಯಲ್ಲಿ ಬದಲಾಗುತ್ತಾ ಸಾಗುತ್ತದೆ , ಯಾರೂ ಸಹಾ ಒಂದೇ ತರನಾದ ಜೀವನ ಶೈಲಿಯನ್ನು ತುಂಬಾ ವರ್ಷಗಳ ಕಾಲ ಮುಂದುವರೆಸಿಕೊಂಡು ಹೋಗುವುದು ತುಂಬಾ ಕಷ್ಟಕರವಾದ ಸಂಗತಿ..... ನಮ್ಮ ಚಿಂತನೆಗಳು , ನಮ್ಮ ಅನುಭವಗಳು ನಮ್ಮ ಜೀವನ ಶೈಲಿಯನ್ನು ಬದಲಾಯಿಸುತ್ತಾ ಸಾಗುತ್ತದೆ ........ ಅನೇಕ ವ್ಯಕ್ತಿಗಳು ನಮ್ಮ ಜೀವನದಲ್ಲಿ ಪ್ರವೇಶಿಸುತ್ತಾರೆ, ಅನೇಕರನ್ನು  ನಮ್ಮ ಜೀವನದಿಂದ ಕಳೆದುಕೊಳ್ಳುತ್ತೇವೆ , ಇನ್ನೂ ಅನೇಕರು ಪ್ರಸ್ತುತ ನಮ್ಮ ಜೊತೆಗಿರುವಂತೆ ಕೊನೆಯವರೆಗೂ ಹೀಗೆ ಇರುತ್ತಾರೆ  , ನಮ್ಮ ಸಂಭಂದ ಶಾಶ್ವತ ಅನ್ನುವ ಆತ್ಮ ವಿಶ್ವಾಸದಿಂದ ನಮ್ಮ ಜೀವನ ಸಾಗುತ್ತಿದೆ ........ ಅದೆಷ್ಟೋ ಮರೆಯಲಾಗದ  ದುಃಖದ ವಿಷಯಗಳು , ಸಂತೋಷದ ಸಂಗತಿಗಳ ನಡುವೆ ನಮ್ಮ ಜೀವನದ ಪಯಣ .........  ಹೀಗೆ ನನ್ನ ಜೀವನದ  ಪ್ರತೀ ಹಂತದಲ್ಲೂ ನನ್ನ ಅನುಭವಕ್ಕೆ  ಬಂದ ಅದೆಷ್ಟೋ ಸಂಗತಿಗಳನ್ನು ನಿಮ್ಮ ಜೊತೆ ಹಂಚಿಕೊಳ್ಳುವ ಒಂದು ಚಿಕ್ಕ ಪ್ರಯತ್ನ ಈ ನನ್ನ "ಮನಸ್ಸಿನ ಮಾತು"